ಕಳೆದ ಐದು ತಿಂಗಳುಗಳಿಂದ ನಾವು ಕೆಲವು ಹೊಸ ಉಪನ್ಯಾಸಕರು ಸೇರಿ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆಸುತ್ತಿದ್ದ ಪ್ರತಿ ತಿಂಗಳ ಎರಡನೇ ಶನಿವಾರದ ಸಭೆ ಇದೇ ಅಕ್ಟೋಬರ್ ೦೯ರನ್ದು ತನ್ನ ಬಳಗಕ್ಕೆ ಒಂದು ಹೆಸರು ಇಟ್ಟುಕೊಂಡಿತು. "ಬಯಲು ಬಳಗ". ಎರಡು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡುವ ಕೆಲವು ಸ್ನೇಹಿತರು ಸೇರಿ ಹುಟ್ಟುಹಾಕಿದ್ದ ಈ "ಬಯಲು ಬಳಗ" ಇದೀಗ ವಿಸ್ತಾರಗೊಂಡಿದೆ. ಈ ಬಳಗ "ಬಯಲು" ಹೆಸರಿನ ಒಂದು ಮಾಸ ಪತ್ರಿಕೆಯನ್ನು ಸಹ ನಡೆಸಿಕೊಂಡು ಬರುತ್ತಿತ್ತು.
ಅಕ್ಟೋಬರ್ ತಿಂಗಳ ಸಭೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಚಿಂತಕಿ ಡಾ.ವಸು 'ಸೆಕ್ಯುಲರಿಸಂ' ಕುರಿತು ವಿಸ್ತಾರವಾಗಿ ಮಾತನಾಡಿದರು. ಕವಿ, ಚಿಂತಕ ಡಾ.ಕೆ.ವೈ.ನಾರಾಯಣಸ್ವಾಮಿ, ಪತ್ರಕರ್ತ, ಬರಹಗಾರ ಮಂಜುನಾಥ್ ಅದ್ದೆ, ಹೋರಾಟಗಾರ ಕನಕಪುರ ಶಿವಣ್ಣ ಸಭೆಯಲ್ಲಿ ಭಾಗವಹಿಸಿದ್ದರು.