
ಆತ್ಮೀಯರೆ,
ಬಯಲು ಬಳಗದ ಜೂನ್ ತಿಂಗಳ ಸಭೆ ಬೆಂಗಳೂರು- ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಮಂಜುನಾಥ ಅದ್ದೆಯವರ ಊರಾದ ಅದ್ದೆ ಗ್ರಾಮದಲ್ಲಿ ನಡೆಯಬೇಕಿತ್ತು. ಆದರೆ, ಮಂಜುನಾಥ ಅದ್ದೆಯವರು ನೆರೆಯ ಗ್ರಾಮ ಕಡತನಮಲೆಯ ಸ್ನೇಹಿತರ ಆಸೆಯಂತೆ ಅಲ್ಲಿಗೆ ಕರೆದುಕೊಂಡು ಹೋದರು. ಆ ಊರಿನ ನೂರಾರು ವರುಷ ಹಳೆಯದಾದ ಅಶ್ವಥ್ಥ ಕಟ್ಟೆಯ ಮೇಲೆ ನಮ್ಮ ಸಭೆ ನಡೆಯಿತು.

ಈ ಸಭೆಯಲ್ಲಿ ಮೂರು 'ಸ್ಮಾಲ್ ಥಿಂಗ್ಸ್ ಸ್ಟಡಿ' ವಿಷಯಗಳನ್ನು ಆಯ್ಕೆ ಮಾಡಿ ಅದಕ್ಕಾಗಿ ಮುರು ತಿಂಗಳ ಕಾಲ ಕೆಲಸ ಮಾಡಬಲ್ಲ ಮೂರು ತಂಡಗಳನ್ನು ರಚಿಸಲಾಯಿತು.
1, ಕರ್ನಾಟಕದಲ್ಲಿ ಸಾಮಾಜಿಕ ಬಹಿಷ್ಕಾರ ಕುರಿತ ಅಧ್ಯಯನ
2, ಭ್ರಷ್ಟಾಚಾರ ಕುರಿತ ವಿವಿಧ ಆಯಾಮಗಳು ಮತ್ತು ಅದರ ವ್ಯಾಪ್ತಿ ಕುರಿತ ಅಧ್ಯಯನ
3, ಕರ್ನಾಟಕದಲ್ಲಿ ಮಹಿಳಾವಾದ ಕುರಿತ ಅಧ್ಯಯನ

ಈ ಮೂರೂ ವಿಷಯಗಳ ಬಗ್ಗೆ ಎರಡು ತಿಂಗಳ ಕಾಲ ವಿಸ್ತ್ರುತ ಅಧ್ಯಯನ ನಡೆಸುವ ನಾಲ್ಕು- ಐದು ಸದಸ್ಯರ ತಂಡಗಳು ಮೂರನೇ ತಿಂಗಳಲ್ಲಿ ತಮ್ಮ ಅಧ್ಯಯನದ ಕುರಿತು ಎಲ್ಲರೊಂದಿಗೆ ಚರ್ಚಿಸಿ ಕಿರುಹೊತ್ತಿಗೆ ತರಲಿದ್ದಾರೆ.
ಬಯಲು ಬಳಗ ಪ್ರಾರಂಭವಾದ ಮೇಲೆ ನಾವು ಕೈಗೊಂಡಿರುವ ದೊಡ್ಡ ಕೆಲಸ ಇದು.
ಈ ಮಧ್ಯೆ ಮೂರು ತಿಂಗಳಲ್ಲಿ ಈ ಅಧ್ಯಯನಗಳನ್ನು ಕುರಿತ ಚರ್ಚೆಗಳು, ಸಂದರ್ಶನಗಳು ನಡೆಯಲಿವೆ..
No comments:
Post a Comment