Tuesday, June 14, 2011

ಬಯಲು ಬಳಗದ ಜೂನ್ ತಿಂಗಳ ಸಭೆ






ಆತ್ಮೀಯರೆ,

ಬಯಲು ಬಳಗದ ಜೂನ್ ತಿಂಗಳ ಸಭೆ ಬೆಂಗಳೂರು- ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಮಂಜುನಾಥ ಅದ್ದೆಯವರ ಊರಾದ ಅದ್ದೆ ಗ್ರಾಮದಲ್ಲಿ ನಡೆಯಬೇಕಿತ್ತು. ಆದರೆ, ಮಂಜುನಾಥ ಅದ್ದೆಯವರು ನೆರೆಯ ಗ್ರಾಮ ಕಡತನಮಲೆಯ ಸ್ನೇಹಿತರ ಆಸೆಯಂತೆ ಅಲ್ಲಿಗೆ ಕರೆದುಕೊಂಡು ಹೋದರು. ಆ ಊರಿನ ನೂರಾರು ವರುಷ ಹಳೆಯದಾದ ಅಶ್ವಥ್ಥ ಕಟ್ಟೆಯ ಮೇಲೆ ನಮ್ಮ ಸಭೆ ನಡೆಯಿತು.


ಈ ಸಭೆಯಲ್ಲಿ ಮೂರು 'ಸ್ಮಾಲ್ ಥಿಂಗ್ಸ್ ಸ್ಟಡಿ' ವಿಷಯಗಳನ್ನು ಆಯ್ಕೆ ಮಾಡಿ ಅದಕ್ಕಾಗಿ ಮುರು ತಿಂಗಳ ಕಾಲ ಕೆಲಸ ಮಾಡಬಲ್ಲ ಮೂರು ತಂಡಗಳನ್ನು ರಚಿಸಲಾಯಿತು.
1, ಕರ್ನಾಟಕದಲ್ಲಿ ಸಾಮಾಜಿಕ ಬಹಿಷ್ಕಾರ ಕುರಿತ ಅಧ್ಯಯನ
2, ಭ್ರಷ್ಟಾಚಾರ ಕುರಿತ ವಿವಿಧ ಆಯಾಮಗಳು ಮತ್ತು ಅದರ ವ್ಯಾಪ್ತಿ ಕುರಿತ ಅಧ್ಯಯನ
3, ಕರ್ನಾಟಕದಲ್ಲಿ ಮಹಿಳಾವಾದ ಕುರಿತ ಅಧ್ಯಯನ


ಈ ಮೂರೂ ವಿಷಯಗಳ ಬಗ್ಗೆ ಎರಡು ತಿಂಗಳ ಕಾಲ ವಿಸ್ತ್ರುತ ಅಧ್ಯಯನ ನಡೆಸುವ ನಾಲ್ಕು- ಐದು ಸದಸ್ಯರ ತಂಡಗಳು ಮೂರನೇ ತಿಂಗಳಲ್ಲಿ ತಮ್ಮ ಅಧ್ಯಯನದ ಕುರಿತು ಎಲ್ಲರೊಂದಿಗೆ ಚರ್ಚಿಸಿ ಕಿರುಹೊತ್ತಿಗೆ ತರಲಿದ್ದಾರೆ.
ಬಯಲು ಬಳಗ ಪ್ರಾರಂಭವಾದ ಮೇಲೆ ನಾವು ಕೈಗೊಂಡಿರುವ ದೊಡ್ಡ ಕೆಲಸ ಇದು.
ಈ ಮಧ್ಯೆ ಮೂರು ತಿಂಗಳಲ್ಲಿ ಈ ಅಧ್ಯಯನಗಳನ್ನು ಕುರಿತ ಚರ್ಚೆಗಳು, ಸಂದರ್ಶನಗಳು ನಡೆಯಲಿವೆ..

Saturday, January 8, 2011

ಹಸಿದ ಕಂದನ ಒಡಲ ತುಡಿತ

ರಾಮಯ್ಯನವರು ಬಂದರು.. ತಮ್ಮ ಪದ್ಯಗಳನ್ನು ಓದಿದರು. ಕಳೆದ ಮೂವತ್ತು ಮೂವತ್ತೈದು ವರ್ಷಗಳಿಂದ ತಮ್ಮೆದೆಯಲ್ಲಿ ಕಾಪಿಟ್ಟುಕೊಂಡಿದ್ದ ಕಾವ್ಯದ ಜಲಧಾರೆ ಹರಿಸಿದರು. ಅವರ ಕಾವ್ಯ ದಲಿತ ಸಂಘರ್ಷ ಸಮಿತಿಯ ಹುಟ್ಟು, ಬೆಳವಣಿಗೆ, ಮೂರ್ನಾಲ್ಕು ದಶಕಗಳ ಕನ್ನಡ ಜನತೆಯ ಪ್ರತಿಸ್ಪಂಧನ, ಸಮಕಾಲೀನ ತಲ್ಲಣಗಳು, ಅದರೆದುರಿಗೆ ನಾವು ಕಂಡುಕೊಳ್ಳಬೇಕಾದ ಜಾಡು.. ಹೀಗೆ.. ಸಿಟ್ಟಾಗಿ, ಬೆಂಕಿಯಾಗಿ, ನೀರಾಗಿ, ಹಸಿದ ಕಂದನ ಒಡಲ ತುಡಿತವಾಗಿ.. ಕಂದನಿಂದ ದೂರವಾದ ತಾಯಿಯ ಎದೆಜಿನುಗಾಗಿ.. ಅವರ ಕಾವ್ಯ ರೂಪು ಪಡೆಯುತ್ತಿದ್ದರೆ, ಇದಕ್ಕೆ ಸಾಕ್ಷಿಯಾಗಿದ್ದ ಅರವತ್ತೈದು-ಎಪ್ಪತ್ತು ಎದೆಗಳಲ್ಲಿ.. ತಾವು ಉಂಡ ಅನ್ನದ ಹಿಂದಿನ ಬೆವರಿನ, ಆ ಬೆವರ ನೆತ್ತರ- ಅತ್ತರಿನ ಲೆಕ್ಕಾಚಾರ..

'ಎಲ್ಲಿದ್ದಾರೆ ಬೇಂದ್ರೆ..?' ಎಂಬ ಪದ್ಯದಿಂದ ಆರಂಭವಾದ ಈ ಕಾವ್ಯಧಾರೆ, ಕೂಡಲ ಸಂಗಮ, ಸಮಕಾಲೀನ ಅಕ್ಷರ ರಾಜಕಾರಣ, ಅನ್ನದ ರಾಜಕಾರಣ, ಯೂನಿವರ್ಸಿಟಿ, ಅಕ್ಯಾಡೆಮಿಕ್ ಅತಂತ್ರತೆ, ದಲಿತ ಸಂಸ್ಕೃತಿಯ ವಿಸ್ಮೃತಿಯ ನೆಲೆ, ಆಂದ್ರದ ನಕ್ಸಲೀಯ ಚಳವಳಿಯ ಮುಗ್ಗುರಿಕೆ, ಉತ್ತರ ಕರ್ನಾಟಕದ ದಲಿತ ಹೆಣ್ಣುಮಕ್ಕಳ ಬಾಳ ಬೆಳೆಕಿನ ಕಗ್ಗೊಲೆ.. ಎಲ್ಲವೂ, ಎಲ್ಲವು... ಪದ್ಯದ ವಸ್ತುಗಳೇ.. ಪದ್ಯ ಕೇಳಿ ಗಂಟಲು ಒಣಗಿದ್ದ ಕಾವ್ಯಾಸಕ್ತರಿಗೆ ಈಗ ಸಮಕಾಲೀನ ಭೀಕರ ತಲ್ಲಣಗಳನ್ನು ಎದುರಿಸಲು ಯಾರು ಏನು ಮಾಡುತ್ತಿದ್ದೀರಿ..? ಎಂಬ ಚಾಟಿ ಬೀಸು...


ಒಟ್ಟು ನಾಲ್ಕು ಕಾಲು ಗಂಟೆಗಳ ಈ ಕಾವ್ಯ ಜಿಜ್ಞಾಸೆ ಕನ್ನಡ ಕಾವ್ಯ ವಾಚನ ಸಂಸ್ಕೃತಿಗೆ, ಆ ಕುರಿತ ಜಿಜ್ಞಾಸೆಗೆ ಏನನ್ನೋ ಕೂಗಿ ಹೇಳುವಂತಿತ್ತು.. ಎಲ್ಲರಿಗೂ ಕೇಳಿಸೀತೆ..?

'ಬಯಲು ಬಳಗ'ಕ್ಕೆ ಇಂಥ ಒಂದು ಕಾರ್ಯಕ್ರಮ ನಡೆಸಿದ್ದಕ್ಕೆ ಧನ್ಯತಾ ಭಾವ. ಇಂಥ ಕಾರ್ಯಕ್ರಮಕ್ಕೆ ನಮಗೆ ಸಹಕರಿಸಿದ ಗುರುಗಳಾದ ಡಾಮ್ನಿಕ್, ಕೆವೈಎನ್ ಅವರಿಗೆ ಧನ್ಯವಾದಗಳು..

Thursday, January 6, 2011

ಎರಡನೇ ಶನಿವಾರದ 'ಬಯಲು' ಸಭೆಗೆ ಬನ್ನಿ

ಕರ್ನಾಟಕದ ದಲಿತಲೋಕದ ಮೂರ್ನಾಲ್ಕು ದಶಕಗಳ ತಲ್ಲಣಗಳನ್ನು ಅಂಗೈಯಲ್ಲಿಟ್ಟುಕೊಂಡು ಪರಿತಪಿಸಿದವರು ಕೋಟಿಗಾನಹಳ್ಳಿ ರಾಮಯ್ಯ. ಈಚಿನ ನಾಲ್ಕು ವರ್ಷಗಳಿಂದ ಕೋಲಾರದ ಅಂತರಗಂಗೆ ಬೆಟ್ಟಕ್ಕೆ ತಮ್ಮ 'ಆದಿಮ'ದ ಮೂಲಕ ಹೊಸ ಉಸಿರು ತುಂಬಲು ಹವಣಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯ ಕಲಾತಂಡಗಳು ಹಾಡುವ ಹಾಡುಗಳಿಗೆ ಬೆಳಕಿನ ಬಣ್ಣ ಬಳಿದ ರಾಮಯ್ಯ, ತಮ್ಮ ಅಕ್ಷರಗಳಲ್ಲಿ ಆರ್ದ್ರ ಭಾವನೆಗಳನ್ನು ಬಿಚ್ಚಿಟ್ಟವರು. ಆದಿಮದ ಕೆಲಸಗಳಲ್ಲಿ ಬರೆಯುವುದನ್ನು ಬಿಟ್ಟಿದ್ದ ಅವರು, ಕಳೆದ ಒಂದೆರಡು ತಿಂಗಳಿನಿಂದ ಹೊಸ ಪದ್ಯ ಬರೆಯುತ್ತಿದ್ದಾರೆಂದು ಗುರುಗಳಾದ ಡಾಮ್ನಿಕ್ ಹೇಳಿದಾಗ 'ಬಯಲು ಗೆಳೆಯರೆಲ್ಲ' ಖುಷಿ ಪಟ್ಟೆವು..

ನಮ್ಮ ಎರಡನೇ ಶನಿವಾರದ 'ಬಯಲು' ಸಭೆಗೆ ರಾಮಯ್ಯ ಬರಲು ಒಪ್ಪಿದ್ದಾರೆ.. ತಮ್ಮ ಹೊಸ ಪದ್ಯಗಳೊಂದಿಗೆ.. ನೀವೂ ಬನ್ನಿ..

ನಮ್ಮೊಂದಿಗೆ ಗುರುಗಳಾದ ಕೆ.ವೈ.ನಾರಾಯಣಸ್ವಾಮಿ, ಡಾಮ್ನಿಕ್, ಮಂಜುನಾಥ ಅದ್ದೆ.. ಇರುತ್ತಾರೆ.

08.01.2011 ಶನಿವಾರ ಮಧ್ಯಾನ್ಹ 4 ಗಂಟೆಗೆ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ..

Sunday, October 10, 2010

"ಬಯಲು ಬಳಗ"





ಕಳೆದ ಐದು ತಿಂಗಳುಗಳಿಂದ ನಾವು ಕೆಲವು ಹೊಸ ಉಪನ್ಯಾಸಕರು ಸೇರಿ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆಸುತ್ತಿದ್ದ ಪ್ರತಿ ತಿಂಗಳ ಎರಡನೇ ಶನಿವಾರದ ಸಭೆ ಇದೇ ಅಕ್ಟೋಬರ್ ೦೯ರನ್ದು ತನ್ನ ಬಳಗಕ್ಕೆ ಒಂದು ಹೆಸರು ಇಟ್ಟುಕೊಂಡಿತು. "ಬಯಲು ಬಳಗ". ಎರಡು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡುವ ಕೆಲವು ಸ್ನೇಹಿತರು ಸೇರಿ ಹುಟ್ಟುಹಾಕಿದ್ದ ಈ "ಬಯಲು ಬಳಗ" ಇದೀಗ ವಿಸ್ತಾರಗೊಂಡಿದೆ. ಈ ಬಳಗ "ಬಯಲು" ಹೆಸರಿನ ಒಂದು ಮಾಸ ಪತ್ರಿಕೆಯನ್ನು ಸಹ ನಡೆಸಿಕೊಂಡು ಬರುತ್ತಿತ್ತು.

ಅಕ್ಟೋಬರ್ ತಿಂಗಳ ಸಭೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಚಿಂತಕಿ ಡಾ.ವಸು 'ಸೆಕ್ಯುಲರಿಸಂ' ಕುರಿತು ವಿಸ್ತಾರವಾಗಿ ಮಾತನಾಡಿದರು. ಕವಿ, ಚಿಂತಕ ಡಾ.ಕೆ.ವೈ.ನಾರಾಯಣಸ್ವಾಮಿ, ಪತ್ರಕರ್ತ, ಬರಹಗಾರ ಮಂಜುನಾಥ್ ಅದ್ದೆ, ಹೋರಾಟಗಾರ ಕನಕಪುರ ಶಿವಣ್ಣ ಸಭೆಯಲ್ಲಿ ಭಾಗವಹಿಸಿದ್ದರು.

Sunday, August 8, 2010

ನಮಗೆ ಸಿಕ್ಕಾಪಟ್ಟೆ ಕೆಲಸ ಹಚ್ಚಿ ತಾವು ಮಾತ್ರ ಮರೆಗೆ ಸರಿದ ಕಿ ರಂ ಮೇಷ್ಟ್ರಿಗೆ ಗೆಳೆಯ ಪ್ರಕಾಶನ ಅಕ್ಷರ...

(ಫೋಟೋ ಕೆಂಡಸಂಪಿಗೆಯಿಂದ)

ಸಮಾಧಿಯೊಳಗೆ
ಮೌನವಾಗಿದ್ದು
ಶಬ್ದಗಳ ಹಂಗಿಲ್ಲದ
ಕಾವ್ಯ ಬರೆಯುತ್ತಿದ್ದ
ಗುರು ಕಿ ರಂ
ಸಾವನ್ನು ಕಂಡಾಯ ಮಾಡಿಕೊಂಡು
ನಿಶ್ಶಬ್ದ ಜಗತ್ತಿನಲ್ಲಿ
ಶಿಷ್ಯರ ತಡಕುತ್ತಿದ್ದಾರೆ...
ಸಿದ್ಧಯ್ಯಾ ಸ್ವಾಮೀ ಬನ್ನಿ..
ಮಂಟೇದ ಲಿಂಗಯ್ಯ ನೀವೇ ಬನ್ನಿ.......

ಪ್ರಕಾಶ ಕುರಿಫಾರಂ

Monday, July 26, 2010

ಬಯಲು... ಬಳಗ..

ಅವ್ವನ ನಗು ಮತ್ತು ಮುದ್ದೆ.. ಕಾಂಪಿಟೆಸನ್














ಗೆಳೆಯ ಪ್ರಕಾಶನ ಮನೆಯ ಮುಂದೆ...















ಗೆಳೆಯ ಪ್ರಕಾಶನ ಮನೆಯ ಮುಂದೆ...















ರಾಮನಗರದ ಸಂವಾದ ಕಚೇರಿಯಲ್ಲಿ 'ಮೇಷ್ಟ್ರು' ಎಂದರೆ ಚರ್ಚೆಯಲ್ಲಿ....















ರಾಮನಗರದ ಸಂವಾದ ಕಚೇರಿಯಲ್ಲಿ 'ಮೇಷ್ಟ್ರು' ಎಂದರೆ ಚರ್ಚೆಯಲ್ಲಿ....















ರಾಮನಗರದ ಸಂವಾದ ಕಚೇರಿಯಲ್ಲಿ 'ಮೇಷ್ಟ್ರು' ಎಂದರೆ ಚರ್ಚೆಯಲ್ಲಿ....